ಭಟ್ಕಳ: ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ ನಿವಾಸಿ ನಾರಾಯಣ ರಾಮ ನಾಯ್ಕ, ಮಂಡಿಸಿದ " ದ ಅಪ್ರೋಚಸ್ ಫಾರ್ ಕ್ಲಾಸಿಫಿಕೇಶನ್ ಆಫ್ ಮೈಕ್ರೋಅರೇ ಡೇಟಾ" (The Approach for Classification of Microarray Data)ಎಂಬ ಪ್ರಬಂಧ ಕ್ಕೆ, ಕಂಪ್ಯೂಟರ್ ಅಂಡ್ ಇನ್ಫಾರ್ಮಶನ್ ಸೈನ್ಸಸ್ ವಿಭಾಗದಲ್ಲಿ ದಿನಾಂಕ: ೧೮-೦೭-೨೦೨೪ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ೨೪ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ-೧) ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಇವರು ಪ್ರಸ್ತುತ ಮಂಗಳೂರಿನ ಕೆನರಾ ಎಂಜಿನಿಯರಿAಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು ಮೈಸೂರಿನ ಮಹಾರಾಜ ಎಂಜಿನಿಯರಿAಗ್ ಕಾಲೇಜಿನ ಡಾ. ಶರತ ಕುಮಾರ ವೈ ಹೆಚ್ ಇವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದರು .